Thursday, October 9, 2008

ನಾನು ನೋಡಿದ ಚಿತ್ರ




ಕುಂದಾಪುರದ ಚಾರು "ನಾಯಕ್, Summer 2007 ಫಿಲ್ಮ್ ನೋಡು. ಒಳ್ಳೆಯದಿದೆ" ಎಂದು ಸುಮಾರು 3 ತಿಂಗಳ ಹಿಂದೆ ಯಾವುದೋ ಸೆಮಿನಾರ್ ನಲ್ಲಿ ಕುಳಿತಾಗ ಹೇಳಿದ್ದ. ಆದರೆ ಕಾಲ ಕೂಡಿ ಬಂದಿರಲಿಲ್ಲ ಹಾಗೂ ಆ ಚಿತ್ರವು ನನಗೆ ದೊರಕಲಿಲ್ಲ. ಮೊನ್ನೆ ಹೇಗೊ ಆಕಸ್ಮಿಕವಾಗಿ ದೊರಕಿದಾಗ ಅದನ್ನು ನೋಡೆ ತೀರಿಸೋಣ ಎಂದು ನೋಡಲು ಕುಳಿತೆ.
ಯಾವುದೋ ಮೆಡಿಕಲ್ ಕಾಲೇಜಿನಲ್ಲಿ ಶುರುವಾಗುವ ಈ ಚಿತ್ರ ಉತ್ತಮ ಸಂದೇಶವನ್ನು ಹೊಂದಿದೆ. ತಮ್ಮ ತಮ್ಮ ಕಾಲೇಜಿನಲ್ಲಿ ಯವುದೋ ಕಿರಿಕ್ ಮಾಡಿಕೊಂಡು , ಅದರಿಂದ ಬಚಾವಾಗಲು Rural Service ಮೇಲೆ ಮಹಾರಾಷ್ಟ್ರದ ಯಾವುದೋ ಹಳ್ಳಿಗೆ ಐದು ವಿದ್ಯಾರ್ಥಿಗಳು ತೆರಳುತ್ತಾರೆ.ಜನರ ಸಮಸ್ಯೆಯ ಗಂಧಗಾಳಿಯ ಪರಿಚಯವೇ ಇಲ್ಲದ ಇವರನ್ನು ಅಲ್ಲಿಯ ಸಮಸ್ಯೆ ಇವರನ್ನು ಪ್ರಜ್ಞಾವಂತ ನಾಗರೀಕರನ್ನಾಗಿ ಮಾಡುತ್ತದೆ.
ಆ ಊರಿನಲ್ಲಿ ಸಾಲದ ಹೊರೆಯಲ್ಲಿ ಸಿಕ್ಕಿ ಸಾವಿರಾರು ರೈತರು ಸಾಯುತ್ತಿರುತ್ತಾರೆ. ಅಲ್ಲಿಯ ಜನಜೀವನವು ಈ ವಿದ್ಯಾರ್ಥಿಗಳ ಮನೋಭಾವವನ್ನು ತಿದ್ದುತ್ತ ಹೋಗುತ್ತದೆ. ಸರಕಾರದಿಂದ ನಿರ್ಲಕ್ಷ ಪಟ್ಟ ಈ ಸಮಸ್ಯೆಗೆ ತಾವೇ ಪರಿಹಾರವನ್ನು ಅಲ್ಲಿಯೇ ನೆಲೆಸಿದ ಕೆಲ ಮುಖಂಡರ ಜೊತೆ ಹುಡುಕಲು ಪ್ರಯತ್ನಿಸುತ್ತಾರೆ.ಆದರೆ ಹೊಲಸು ರಾಜಕೀಯದಿಂದ ಇವರ ಪ್ರಯತ್ನ ವಿಫಲವಾಗುತ್ತದೆ. ಕೊನೆಯಲ್ಲಿ ದೇಶದ ಗಮನಕ್ಕೆ ಈ ಸಮಸ್ಯೆಯನ್ನು ತರಲು ನ್ಯಾಯಂಗಕ್ಕೆ ತನ್ನನ್ನು ಚಿತ್ರದ ನಾಯಕ ಒಪ್ಪಿಸಿಕೊಳ್ಳುತ್ತಾನೆ.ಆಶಿತೋಷ್ ರಾಣಾ ಅವರು ತಮ್ಮ ಪಾತ್ರದಿಂದ ಗಮನಸೆಳೆಯುತ್ತಾರೆ.

No comments: